ಪೈರಿಗೆ ನೀರು ಬೇಕೆಂಬಲ್ಲಿ ಉಚಿತವನರಿದು ಬಿಡಬೇಕು
Shivanand
May 9, 2020
featured, General News, ವಚನಕಾರರು
232 Views
ಕ್ರಿಯೆಗೆ ಅರಿವು ಬೇಕೆಂಬಲ್ಲಿ ಉಭಯವನರಿದು ಘಟಿಸಬೇಕು.
ಏರಿ ಹಿಡಿವನ್ನಕ್ಕ ನೀರ ಹಿಡಿದಡೆ ಸುಖವಲ್ಲದೆ ಮೀರಿದರುಂಟೆ?
ಕ್ರಿಯೆ ಬಿಡಲಿಲ್ಲ, ಅರಿವ ಮರೆಯಲಿಲ್ಲ.
ಬೆಳೆಯ ಕೊಯಿದ ಮತ್ತೆ, ಹೊಲಕ್ಕೆ ಕಾವಲುಂಟೆ?
ಫಲವ ಹೊತ್ತ ಪೈರಿನಂತೆ, ಪೈರನೊಳಕೊಂಡ ಫಲದಂತೆ,
ಅರಿವು ಆಚರಣೆಯಲ್ಲಿ ನಿಂದು,
ಆಚರಣೆ ಅರಿವಿನಲ್ಲಿ ಲೇಪನಾದ ಮತ್ತೆ
ಕಾಮಭೀಮ ಜೀವಧನದೊಡೆಯನೆಂಬುದ ಭಾವಿಸಲಿಲ್ಲ.
-ಒಕ್ಕಲಿಗ ಮುದ್ದಣ್ಣ
ಜೋಳದಹಾಳದ ಒಕ್ಕಲಿಗ ಮುದ್ದಣ್ಣ ಬಸವಣ್ಣನವರ ಸಮಕಾಲೀನ ಶರಣ. ಕೃಷಿಕಾಯಕದ ಮೂಲಕ ಜಂಗಮ ದಾಸೋಹ ನಡೆಸಿದಾತ. ಕೃಷಿಯ ಅನುಭವದ ಮೂಲಕ ಅನುಭಾವದ ಎತ್ತರಕ್ಕೆ ಏರುತ್ತಾನೆ. ಪೈರಿಗೆ ಎಷ್ಟು ಬೇಕೋ ಅಷ್ಟೇ ನೀರು ಬಿಡಬೇಕು. ಕಡಿಮೆ ನೀರು ಬಿಟ್ಟರೆ ಪೈರು ಒಣಗುವುದು. ಹೆಚ್ಚಿಗೆ ನೀರು ಬಿಟ್ಟರೆ ಎರೆಭೂಮಿ ಸವುಳಾಗಿ ಪೈರು ಕೊಳೆಯುವುದು. ಅರಿವಿಲ್ಲದ ಕ್ರಿಯೆಯಿಂದಾಗಿ ಇಂಥ ಸಮಸ್ಯೆಗಳು ಉದ್ಭವಿಸುತ್ತವೆ.
ನಮ್ಮ ಕ್ರಿಯೆಗೆ ಅರಿವು ಬೇಕೆಂದರೆ ಕ್ರಿಯೆ ಮತ್ತು ಅರಿವಿನ ಸಂಬಂಧವನ್ನು ಅರ್ಥೈಸಿಕೊಂಡು ಅವು ಪರಿಪೂರ್ಣವಾಗಿ ಒಂದಾಗುವಂತೆ ಮಾಡಬೇಕು. ಮಡಿಯ ಏರಿಯ ಸಾಮರ್ಥ್ಯದಷ್ಟೇ ನೀರಿನ ಸದುಪಯೋಗ ಮಾಡಿಕೊಂಡರೆ ನೀರಿನ ಕೊರತೆ ಉಂಟಾಗುವುದಿಲ್ಲ ಮತ್ತು ಪೈರಿಗೂ ತೊಂದರೆಯಾಗುವುದಿಲ್ಲ. ಕರ್ತವ್ಯವನ್ನು ಅರಿವಿನೊಂದಿಗೆ ಪಾಲನೆ ಮಾಡುವುದರಿಂದ ಯಾವುದೇ ರೀತಿಯ ಹಾನಿ ಸಂಭವಿಸದೆ ಸುಖವಾಗಿರಬಹುದು. ಆದರೆ ಅರಿವು ಮತ್ತು ಕ್ರಿಯೆ ಒಂದಾಗದಿದ್ದರೆ ದುಃಖವು ಕಟ್ಟಿಟ್ಟ ಬುತ್ತಿ. ಬೀಜ ಸಂಗ್ರಹಿಸಲು, ಗೊಬ್ಬರ ತಯಾರಿಸಲು ಮತ್ತು ಕೀಟಗಳ ಹಾವಳಿಯನ್ನು ತಪ್ಪಿಸಲು ನಮ್ಮ ಪೂರ್ವಜರು ಯಾವ ಯಾವ ಕ್ರಮ ಕೈಗೊಳ್ಳುತ್ತಿದ್ದರು ಎಂಬುದನ್ನು ಮರೆತಾಗ ದುರಂತಗಳು ಸಂಭವಿಸುತ್ತವೆ.
ಹಿಂದಿನ ಕಾಲದ ನಮ್ಮ ರೈತರು ಅತಿ ಆಸೆಯಿಂದ ಗತಿಗೆಟ್ಟವರಾಗಿರಲಿಲ್ಲ. ಕಂಬಾರ, ಕುಂಬಾರ, ಹಡಪದ, ಮಡಿವಾಳ, ಬಡಗಿ ಮುಂತಾದ 12 ಮಂದಿ ಆಯಗಾರರ ಕುಟುಂಬಗಳಿಗೂ ಆಹಾರಧಾನ್ಯ ಪೂರೈಸುತ್ತ, ಇದ್ದುದರಲ್ಲೇ ಸಂತೃಪ್ತಿಯಿಂದ ಬದುಕುವವರಾಗಿದ್ದರು. ಇಂಥ ಸರಳ ಸಹಜ ಕೃಷಿ ಸಂಸ್ಕೃತಿಗೆ ಹತ್ತು ಸಾವಿರ ವರ್ಷಗಳ ಇತಿಹಾಸವಿದೆ. (ಕೃಷಿ ಸಂಸ್ಕೃತಿಯೇ ಋಷಿ ಸಂಸ್ಕೃತಿಗೆ ಮೂಲ ಎಂದು ಘನ ವಿದ್ವಾಂಸರಾದ ಪ್ರೊ. ಎ.ಎಸ್. ಹಿಪ್ಪರಗಿ ಅವರು ಹೇಳುತ್ತಾರೆ.) ಬೆಳೆಯನ್ನು ಕೊಯ್ದಮೇಲೆ ಹೊಲ ಕಾಯಬೇಕಿಲ್ಲ. ಆದರೆ ಬೆಳೆ ಕೊಯ್ಯುವವರೆಗೆ ಕ್ರಿಯೆ ಮತ್ತು ಅರಿವು ಒಂದಾಗಿರಬೇಕಾಗುತ್ತದೆ ಎಂದು ಮುದ್ದಣ ತಿಳಿಸುತ್ತಾನೆ. ಫಲವನ್ನು ಹೊತ್ತ ಪೈರಿನ ಹಾಗೆ, ಪೈರಿನೊಂದಿಗಿನ ಫಲದ ಹಾಗೆ. ಆಚರಣೆಯಲ್ಲಿ ಇರಬೇಕು; ಆಚರಣೆ ಅರಿವಿಗೆ ಅಂಟಿಕೊಂಡಿರಬೇಕು. ಈ ಸಾಧನೆ ಮಾಡಿದಾತ ಶಿವಸ್ವರೂಪಿಯೇ ಆಗುವನು.
Check Also
ಬೈಲಹೊಂಗಲ: ಪ್ರೇಮಕ್ಕ ಅಂಗಡಿ ನಮ್ಮ ಸಮಾಜದ ದಿಟ್ಟ ಹೆಣ್ಣುಮಗಳು ಇಂದು ಇಡೀ ರಾಜ್ಯದಲ್ಲಿ ಲಿಂಗಾಯತ ಸಮಾಜದ ಮಹಿಳೆಯರು ಸಂಘಟಿತ …
ಬೆಂಗಳೂರು: ರಾಜ್ಯದಲ್ಲಿನ ಸ್ವಾಮೀಜಿಗಳ ಪೈಕಿ ಕೆಲವರು ರಾಜಕೀಯ ನಾಯಕರಂತೆ ವರ್ತಿಸುತ್ತಿರುವುದು ಅವರು ಪ್ರತಿನಿಧಿಸುವ ಸ್ಥಾನಗಳಿಗೆ ಶೋಭೆ ತರುವಂತಹದ್ದಲ್ಲ. ಸಮಾಜಕ್ಕೆ …
ಬಸವಣ್ಣ ಬರುವಾಗ | ಬಿಸಿಲು ಬೆಳದಿಂಗಳು || ಮೊಗ್ಗು ಮಲ್ಲಿಗೆ | ಅರಳ್ಯಾವ || ಯಾಲಕ್ಕಿ ಗೊನೆಬಾಗಿ …
ರಾಮದುರ್ಗ: ೧೯೫೬ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭ. ಡಾ.ಪಾವಟೆಯವರು ಕುಲಪತಿಗಳಾಗಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದ …
ಲಿಂಗಾಯತ ಕ್ರಾಂತಿ: ಚನ್ನಮ್ಮ ಮತ್ತು ವೀರಮ್ಮ ಇವರಿಬ್ಬರು ಕಿತ್ತೂರ ದೇಸಾಯಿಣಿಗಳು. ಇವರಿಬ್ಬರ ಹೆಸರು ಒಂದಾಗಿರುವ ಚನ್ನವೀರಮ್ಮಾಜಿ ಎನ್ನುವ ಕೆಳದಿಯ …
ಬೀದರ್: 12ನೆ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿ ನಂತರ ಲಿಂಗಾಯತ ಧರ್ಮದ ಶರಣರು ಚೆಲ್ಲಾಪಿಲ್ಲಿ ಆದರು, ಹಲವಾರು ಶರಣರು …
~ ಡಾ. ಜೆ ಎಸ್ ಪಾಟೀಲ. ವಿಜಯಪುರ: ಭಾರತವು ಧಾರ್ಮಿಕ ಮೂಢನಂಬಿಕೆಗಳ ತವರು ಮನೆ. ಇಲ್ಲಿ ಧಾರ್ಮಿಕ ನಂಬಿಕೆಗಳ …
ವಿಜಯಪುರ: 1952-1962 ಹತ್ತು ವರ್ಷಗಳ ಕಾಲ ಲೋಕಸಭಾ ಸದಸ್ಯರಾಗಿದ್ದ ರಾಮಪ್ಪ ಬಿದ್ರಿ ಈ ಹುದ್ದೆಯನ್ನು ಎಂದೂ ತಮ್ಮ ಸ್ವಂತದ ಲಾಭಕ್ಕಾಗಿ …
ಲಿಂಗಾಯತ ಧರ್ಮ ಮಾನ್ಯತೆಯ ಹೊರಾಟದಲ್ಲಿ ಲಿಂಗಾಯತ ಸಮನ್ವಯದ ಸಮಿತಿ ಪಾತ್ರ. ಬಸವಕಲ್ಯಾಣ: ಬೆಂಗಳೂರಿನ ಕುಂಬಳಗೋಡಿನ ಬಸವ ಗಂಗೋತ್ರಿಯಲ್ಲಿ ಜೂನ್ …
ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …
ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …
ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …
ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …
ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …
ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …