ಲಿಂಗಾಯತರಿಗೆ ಮಾದರಿ ಶಾಸಕ ಬಿ. ನಾರಾಯಣರಾವ್
Shivanand
September 24, 2020
featured, General News, ಲಿಂಗಾಯತ ಮಹನೀಯರು
82 Views
ಎಮ್ಮವರಿಗೆ ಸಾವಿಲ್ಲ.
ಎಮ್ಮವರು ಸಾವನರಿಯರು.
ಸಾವೆಂಬುದು ಸಯವಲ್ಲ.
ಲಿಂಗದಲ್ಲಿ ಉದಯವಾದ ನಿಜೈಕ್ಯರಿಗೆ ಆ ಲಿಂಗದಲ್ಲಿಯಲ್ಲದೆ ಬೇರೆ ಮತ್ತೊಂದೆಡೆಯಿಲ್ಲ.
ಕೂಡಲಸಂಗಮದೇವರ ಶರಣ ಸೊಡ್ಡಳ ಬಾಚರಸರು, ನಿಜಲಿಂಗದ ಒಡಲೊಳಗೆ ಬಗಿದು ಹೊಕ್ಕಡೆ
ಉಪಮಿಸಬಲ್ಲವರ ಕಾಣೆನು.
ನಮ್ಮವರಾದ ಬಿ.ನಾರಾಯಣರಾವ ರವರಿಗೆ ಸಾವಿಲ್ಲ.ಬಸವ ಭಕ್ತರಾದ ಅವರು ಲಿಂಗಾಯತ ನಾಯಕರಾದವರು ಹೀಗಿರಬೇಕು ಎಂಬ ಲಿಂಗಾಯತ ನಾಯಕರಿಗೆ ISI ಮಾರ್ಕ ಆಗಿದ್ದರು. ನಾನು ಮೊದಲು ಬಾರಿ ಅವರನ್ನು ಕಂಡಿದ್ದು ೧೯೯೪-೯೫ ರಲ್ಲಿ,ಸಚಿವ ಶ್ರೀ ಬಸವರಾಜ ಪಾಟೀಲ ಅಟ್ಟೂರ ರವರ ಮನೆಯಲ್ಲಿ. ತೀರ ಇತ್ತೀಚೆಗೆ ಕೆಲವು ಸಮಾರಂಭದಲ್ಲಿ ವೇದಿಕೆ ಹಂಚಿಕೊಂಡಿದ್ದೆ. ಬಸವಕಲ್ಯಾಣದ ಒಂದು ಸಮಾರಂಭ ದಲ್ಲಿ ಅವರು ಬಸವಣ್ಣನವರ ಬಗ್ಗೆ ಆಡಿದ ಮಾತುಗಳು ನನ್ನನ್ನು ಆಶ್ಚರ್ಯ ಚಕಿತನನ್ನಾಗಿಸಿತ್ತು. ಲಿಂಗಾಯತ ಸಮಾಜದ ನಾಯಕರಾರು ಆಡದ ಮಾತುಗಳನ್ನು ಅವರು ಅಂದು ಆಡಿದ್ದರು. ಜೀವನ ಪರ್ಯಂತ ಬಸವಣ್ಣನ ಸೇವೆ ತಮ್ಮ ಪರಮ ಗುರಿ ಎಂದಿದ್ದರು ಅವರು.
ಮುಂದೊಂದು ದಿನ ವಿಧಾನ ಸಭೆಯಲ್ಲಿ ಅವರು ತಮ್ಮ ತೆರೆದ ಹೃದಯವನ್ನು ಬಿಚ್ಚಿಟ್ಟರು ಶಾಸನ ಸಭೆಯಲ್ಲಿ. ಅಂದು ಅವರಾಡಿದ ಹೃದಯಾಳದ ಮಾತುಗಳು ಕೊಟ್ಯಾಂತರ ಲಿಂಗಾಯತರ ಗಮನ ಸೆಳೆಯಿತು.
ಇಂದು ನಿಜ ಜಂಗಮ ಕಣ್ಮರೆಯಾಗಿದ್ದಾರೆ, ಅವರ ಜಂಗಮ ಸೇವೆ ಮೊದಲಿಗಿಂತಲು ಅವಶ್ಯಕತೆ ಈಗ ಹೆಚ್ಚಿತ್ತು,ನಾವು ಅವರನ್ನು ಕಳೆದುಕೊಂಡಿದ್ದು ಲಿಂಗಾಯತ ಧರ್ಮಕ್ಕೆ ತುಂಬಲಾರದ ನಷ್ಟ. ಅವರ ಪ್ರಿಯಪಾತ್ರರಿಗೆ ಅವರ ಕಣ್ಮರೆಯ ದುಃಖ ಬರಿಸುವ ಶಕ್ತಿ ಆ ಬಸವಾದಿ ಶರಣರುನೀಡಲಿ.
ಶರಣಾಂಜಲಿ.
Check Also
ಬೆಂಗಳೂರು: ರಾಜ್ಯದಲ್ಲಿನ ಸ್ವಾಮೀಜಿಗಳ ಪೈಕಿ ಕೆಲವರು ರಾಜಕೀಯ ನಾಯಕರಂತೆ ವರ್ತಿಸುತ್ತಿರುವುದು ಅವರು ಪ್ರತಿನಿಧಿಸುವ ಸ್ಥಾನಗಳಿಗೆ ಶೋಭೆ ತರುವಂತಹದ್ದಲ್ಲ. ಸಮಾಜಕ್ಕೆ …
ಬಸವಣ್ಣ ಬರುವಾಗ | ಬಿಸಿಲು ಬೆಳದಿಂಗಳು || ಮೊಗ್ಗು ಮಲ್ಲಿಗೆ | ಅರಳ್ಯಾವ || ಯಾಲಕ್ಕಿ ಗೊನೆಬಾಗಿ …
ರಾಮದುರ್ಗ: ೧೯೫೬ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭ. ಡಾ.ಪಾವಟೆಯವರು ಕುಲಪತಿಗಳಾಗಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದ …
ಲಿಂಗಾಯತ ಕ್ರಾಂತಿ: ಚನ್ನಮ್ಮ ಮತ್ತು ವೀರಮ್ಮ ಇವರಿಬ್ಬರು ಕಿತ್ತೂರ ದೇಸಾಯಿಣಿಗಳು. ಇವರಿಬ್ಬರ ಹೆಸರು ಒಂದಾಗಿರುವ ಚನ್ನವೀರಮ್ಮಾಜಿ ಎನ್ನುವ ಕೆಳದಿಯ …
ಬೀದರ್: 12ನೆ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿ ನಂತರ ಲಿಂಗಾಯತ ಧರ್ಮದ ಶರಣರು ಚೆಲ್ಲಾಪಿಲ್ಲಿ ಆದರು, ಹಲವಾರು ಶರಣರು …
~ ಡಾ. ಜೆ ಎಸ್ ಪಾಟೀಲ. ವಿಜಯಪುರ: ಭಾರತವು ಧಾರ್ಮಿಕ ಮೂಢನಂಬಿಕೆಗಳ ತವರು ಮನೆ. ಇಲ್ಲಿ ಧಾರ್ಮಿಕ ನಂಬಿಕೆಗಳ …
ವಿಜಯಪುರ: 1952-1962 ಹತ್ತು ವರ್ಷಗಳ ಕಾಲ ಲೋಕಸಭಾ ಸದಸ್ಯರಾಗಿದ್ದ ರಾಮಪ್ಪ ಬಿದ್ರಿ ಈ ಹುದ್ದೆಯನ್ನು ಎಂದೂ ತಮ್ಮ ಸ್ವಂತದ ಲಾಭಕ್ಕಾಗಿ …
ಲಿಂಗಾಯತ ಧರ್ಮ ಮಾನ್ಯತೆಯ ಹೊರಾಟದಲ್ಲಿ ಲಿಂಗಾಯತ ಸಮನ್ವಯದ ಸಮಿತಿ ಪಾತ್ರ. ಬಸವಕಲ್ಯಾಣ: ಬೆಂಗಳೂರಿನ ಕುಂಬಳಗೋಡಿನ ಬಸವ ಗಂಗೋತ್ರಿಯಲ್ಲಿ ಜೂನ್ …
ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …
ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …
ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …
ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …
ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …
ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …
ಚನ್ನಮ್ಮನ ಕಿತ್ತೂರು: ಪಿ. ಲಂಕೇಶರ ನಂತರ ಕನ್ನಡ ಪತ್ರಿಕೋದ್ಯಮ ಮತ್ತೊಂದು ರೀತಿ ಕಲ್ಪನೆ ಮೀರಿ ಮುನ್ನಡಿಸಿದ್ದ ಕೀರ್ತಿ ರವಿಗೆ …